Wednesday, July 23, 2008

ಯ೦ಕ್ಟಮ್ಮ

ಮಗ ಸ್ವಲ್ಪ ವರ್ಷಗಳ ಹಿಂದೆ ನಾನು 7 ನೇ class ಅಲ್ಲಿ ಇದ್ದೆ ಕಣ್ಲ. ಅದಕ್ಕೆ ಒಂದು ವರ್ಷದ ಹಿಂದೆ 6 ನೇ class ಅಲ್ಲೂ ಇದ್ದೆ ಕಣ್ಲ. ಅಲ್ಲಿ ಯೆಂಕ್ಟಮ್ಮನ ಪರಿಚಯ ಆಯಿತು ನೋಡು. ಯೆಂಕ್ಟಮ್ಮ ಬೇರೆ ಯಾರು ಅಲ್ಲ, ನಮಗೆ ಇಂಗ್ಲಿಷ್ ಪಾಠ ಮಾಡಕ್ಕೆ ಅಂತ ಕನ್ನಡ ಮೀಡಿಯಂ ಇಂದ ಸ್ಪೆಷಲ್ ಆಗಿ ಆಹ್ವಾನ ನೀಡಿದ್ದ ಒಂದು TCH passout. ಆಕೆ ಪ್ರಾಥಃಸ್ಮರಣೀಯಳು, ಯಾಕೆಂದರೆ ಅವಳ ಒಂದು ಚಟ ನಮಗೆಲ್ಲ ಪ್ರಾಣಸಂಕಟ. ಆ ಯಮ್ಮನಿಗೆ ಒಂದು ಸನಾತನ ರೋಗ ಇತ್ತು. ಅದೇನಪ್ಪ ಅಂದ್ರೆ, ಎಲ್ಲ ವಿದ್ಯಾರ್ಥಿಗಳಿಗೆ ಒಂದು standing instruction ಕೊಟ್ಟಿದ್ಲು. ನಾವೆಲ್ಲ ನಿತ್ಯಶಾಪಗ್ರಸ್ತರು. ಆ ಶಾಪಕ್ಕೆ ಪರಿಹಾರದ ಸಲುವಾಗಿ ಎಲ್ಲರ್ಗೂ ದಿನಂಪ್ರತಿ ಒಂದು common homework ಇತ್ತು. 10 ಪದಗಳಿಗೆ ಅರ್ಥ, 10 ಪದಗಳಿಗೆ ವಿರುದ್ದಾರ್ಥಕ ಶಬ್ದ, 10 ಪದಗಳಿಗೆ ಬಹುವಚನ ರೂಪ 10 ಪದಗಳಿಗೆ ಕನ್ನಡ ಅನುವಾದ ಬರೆದ್ಕೊಂಡ್ ಬರಬೇಕಾಗಿತ್ತು !!! ಸ್ವಲ್ಪ ಆದರು ಸಾಮಾನ್ಯ ಜ್ಞಾನ ಇದ್ಯ ಮಗ ಆ ಯಮ್ಮಂಗೆ? ಮಕ್ಕಳಿಗೆ ಅದು ಹೊರೆ ಆಗಲ್ವಾ? ಆ ಹೊರೆನ ಅವ್ರು ಅಸಡ್ಡೆ ರೂಪದಲ್ಲಿ ವ್ಯಕ್ತಪಡಿಸಲ್ವಾ? ದಿನಾ ಸಾಯುವವರಿಗೆ ಅಳೋರು ಯಾರು ಅಂತ ನಿಟ್ಟುಸಿರು ಬಿಡಲ್ವಾ? ತರಗತಿಯಲ್ಲಿ ಇದ್ದ ಕೆಲವು ಧೈರ್ಯಶಾಲಿಗಳು ಮಂಡು ಬಿದ್ದು ಒದೆ ತಿನಕ್ಕೆ ತಯಾರಿದ್ದರು. ಇನ್ನು ಕೆಲವು ಬುದ್ದಿವಂತರು ಹೇಗಾದರೂ ಚಾಕಚಕ್ಯತೆ ಇಂದ ನಿಭಾಯಿಸೋಣ ಅಂತ ನಿಶ್ಚಿಂತೆ ಇಂದ ಇದ್ದರು. ನನ್ನಂತಹ ಉಳಿದ ಕೆಲವು ನತದೃಶ್ಟ ಉತ್ತಮ ವಿದ್ಯಾರ್ಥಿಗಳು ಆಕೆಯ ಶಾಪಕ್ಕೆ ತುತ್ತಾಗಿ ವ್ಯಥೆ ಪಡ್ತಾಇದ್ವಿ. ಒಟ್ಟಿನಲ್ಲಿ ಹೇಳ್ಬೇಕು ಅಂದ್ರೆ ಎಲ್ಲರ ಮನಸ್ಸಿನಲ್ಲಿ ಚಂಡಿ ಚಾಮುಂಡಿಯಂತೆ ತನ್ನ ಚಿತ್ರಣ ಮೂಡ್ಸಿದ್ಲು.
ಒಂದ್ ದಿನ ಏನಾಯಿತು ಅಂದ್ರೆ, ನಿತ್ಯಕರ್ಮ ಯಾರ್ಯಾರು ಮಾಡಿಕೊಂಡು ಬಂದಿಲ್ವೋ, ಅದೇ ಮಗ daily homework 10101010 ಅವರ್ನೆಲ್ಲ ಹೊರಗೆ ಕಳಿಸಿಬಿಟ್ಳು. ಅವತ್ತು ನೋಟ್ಸ್ ಬರ್ಸೋ ದಿನ. ಆ ದಿನದ ವಿಶೇಷತೆ ಏನಂದ್ರೆ ಪಾಠದ ಕೊನೆಯಲ್ಲಿರುವ ಅಭ್ಯಾಸದ ಪ್ರಶ್ನೆಗಳಿಗೆ ಉತ್ತರ ಬರ್ಸೋ ದಿನ. ನಮ್ ಯೆಂಕ್ಟಮ್ಮನ ಸಹಾಯಕ್ಕೆ ಅಂತ ಯಾರೋ ಪುಣ್ಯಾತ್ಮ ಒಂದು ಗೈಡ್ ತಯಾರಿಸಿದ್ದ. ಆ ಗೈಡ್ ನ ಯೆತ್ತುಚ್ಚೆಹೊಯಿದಂಗೆ ಓದಿಕೊಂಡು ಹೋಗೋಳು. ನಟದ್ರುಷ್ಟ ವಿದ್ಯಾರ್ಥಿಗಳೆಲ್ಲ ಬರ್ಕೊಬೇಕು. ಆ rough ನ ಪರಿಷ್ಕರಿಸಿ ಮರುದಿನ ನೀಟಾಗಿ ನೋಟ್ಸ್ ಅಂತ ಮಾಡಿ, ನಿತ್ಯಕರಮದ್ ಜೊತೆ ನೂತನ ಕರ್ಮಕ್ಕೆ ಶರಣಾಗಬೇಕು. ಈ ಮಧ್ಯೆ ಸಭಾತ್ಯಾಗ ಮಾಡಿದ ವಿದ್ಯಾರ್ಥಿಗಳಿಗೆ ಯಂಕ್ಟಮ್ಮ ಬರೆಸಿದ ನೋಟ್ಸ್ ಕೊಡುವಂತಿಲ್ಲ. ಇಷ್ಟಾದರೂ ಬಹಿಷ್ಕ್ರುತರು ಹೇಗಾದ್ರು ಮಾಡಿ ಮರುದಿನ ನೋಟ್ಸ್ ತರಲೇಬೇಕು. ಅದ್ರುಸ್ಟವಶಾತ್ ಒಬ್ಬ ಹುಡ್ಗ ಈ ಎರಡೂ ಕಟ್ಟಳೆಗಳನ್ನು ಮುರಿದು ವಿಜಯಶಾಲಿಯಾಗಿ ಹೊರಹೊಮ್ಮಿದ. ಆಗ ಯಂಕ್ಟಮ್ಮ೦ಗೆ ದುಃಖ ಮತ್ತು ಆಶ್ಚರ್ಯ ಒಮ್ಮೆಲೆಗೆ ಆಯಿತು. ಅವನನ್ನ ಪ್ರಶ್ನಿಸಿದಾಗ ಗೊತ್ತಾಯಿತು, ಅವನ ಸಹೋದರಿ ಯಂಕ್ಟಮ್ಮನ ಹಳೆಯ ಶಿಷ್ಯೆ. ಆಕೆಯ ನೋಟ್ಸ್ ನಕಲು ಮಾಡಿ ತಂದಿದ್ದ. ಕೊನೆಗೆ ತನ್ನ ಸೋಲು ಒಪ್ಪಿಕೊಂಡಳು.

How stupid ಅಲ್ವಾ ಮಗ? ಇಲ್ಲಿ ಗಮನಿಸಬೇಕಾಗಿರೋ ಅಂಶ ಅಂದ್ರೆ "ನಾನಿಲ್ಲದೆ ಸೂರ್ಯನೇ ಹುಟ್ಟಲ್ಲ ಅನ್ನೋ ಮನೋಭಾವ ", "ಕಿರಿಯರ ಮುಘ್ದತೆಯ ಶೋಷಣೆ" ಇತ್ಯಾದಿ. ಇವೆಲ್ಲ ಅವಳ ಉದ್ದೇಶವಲ್ಲದೆ ಇರಬಹುದು, ಆದರೆ ಇದು ಅವಳ ಶಿಕ್ಷಣದ ಗುಣಮಟ್ಟ, ಅವಳ ಮೌಢ್ಯದ ಪ್ರತಿಭಿಂಬ, ತಿಳುವಳಿಕೆಯ ಕೊರತೆ, ಅಜ್ಞಾನದ ಪರಮಾವದಿ.

ಏನಪ್ಪಾ ಇವನು ಯ೦ಕ್ಟಮ್ಮನ ಜನ್ಮ ಜಾಲಾಡ್ತಾ ಇದಾನೆ ಅಂತ ಅನ್ಕೊಬೇಡ ಮಗ, ಬಹಳ ದುಃಖದಿಂದ ಹೇಳ್ತೀನಿ, ಇಂತಹವರಿಂದ ಪಾಠಕಲಿತ ನಾನು ಜೀವನದಲ್ಲಿ ಹೇಗೆ ಉದ್ದಾರ ಆಗಕ್ಕೆ ಸಾಧ್ಯ ನೀನೆ ಹೇಳು? ಪರಿಸ್ಥಿತಿ ಹೀಗಿರುವಾಗ ನಾನು ಕಿಲಿಮಂಜಾರೋ ಇರಲಿ, ಸಿದ್ದಗಂಗೆ ಬೆಟ್ಟ ಹತ್ತುತಿನೋ ಇಲ್ಲವೋ ...

1 comment:

Anonymous said...

ಅಂಗಾರೆ ಬುಧ್ಧಿ ತಾವು ಉತ್ತಮ ವಿದ್ಯಾರ್ಥಿಗಳು ಅನ್ನಿ....ಬೊ ಸಂತೋಸ ಆತು ಬುಡಿ ಕೇಳಿ ......